ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಇಳಿದ ಜೀಪು

ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಇಳಿದ ಜೀಪು

Kadaba Times News
0

ಕಡಬ ಟೈಮ್ಸ್ (KADABA TIMES):ಸುಳ್ಯದ ದೊಡ್ಡತೋಟದಿಂದ ಮರ್ಕಂಜ ರಸ್ತೆಯ ನಳಿಯಾರು ಎಂಬಲ್ಲಿ ಜೀಪೊಂದು  ನಿಯಂತ್ರಣ ತಪ್ಪಿ ತೋಡಿಗಿಳಿದಿದ್ದು ಚಾಲಕ ಅಪಾಯದಿಂದ ಪಾರಾದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಮರ್ಕಂಜದ  ಕಟ್ಟಕ್ಕೋಡಿ ಗಣಪಯ್ಯ ಗೌಡ ಎಂಬವರು  ಜೀಪು ಚಲಾಯಿಸುತ್ತಿದ್ದರು.

ದೊಡ್ಡತೋಟ- -ಮರ್ಕಂಜಕ್ಕೆ  ರಸ್ತೆಯಲ್ಲಿ  ಇಳಿಜಾರು ಮತ್ತು ತಿರುವು ಇದೆ. ಕೆಳಭಾಗದಲ್ಲಿ ತೋಡೊಂದು ಹರಿಯುತ್ತಿದ್ದು, ತಿರುವಿನಲ್ಲಿ ನಿಯಂತ್ರಣ ತಪ್ಪಿದ ಜೀಪು ನೇರವಾಗಿ ಸುಮಾರು 50 ಅಡಿ ಕೆಳಗೆ ಹರಿಯುವ ತೋಡಿಗೆ ಇಳಿದಿದೆ.

ಜೀಪಿನಲ್ಲಿ ಚಾಲಕ ಮಾತ್ರ  ಇದ್ದು, ಅದೃಷ್ಟವಶಾತ್  ಪಾರಾಗಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top