ಕಡಬ ಪೇಟೆಯಲ್ಲಿ ತಡ ರಾತ್ರಿ ದನಕ್ಕೆ ಡಿಕ್ಕಿ ಹೊಡೆದ ಸ್ಕೂಟಿ: ಸವಾರ ಪಾರು, ಬಿಡಾಡಿ ಗೋವು ಮೃತ್ಯು

ಕಡಬ ಪೇಟೆಯಲ್ಲಿ ತಡ ರಾತ್ರಿ ದನಕ್ಕೆ ಡಿಕ್ಕಿ ಹೊಡೆದ ಸ್ಕೂಟಿ: ಸವಾರ ಪಾರು, ಬಿಡಾಡಿ ಗೋವು ಮೃತ್ಯು

Kadaba Times News
0

 ಕಡಬ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಬಿಡಾಡಿ  ಗೋವು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಹಿಂದೂ ಸಂಘಟನೆಯ ಕಾರ್ಯಕರ್ತರು  ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ .27ರಂದು ನಡೆದಿದೆ.

ಜೆಸಿಬಿ ಮೂಲಕ ಗುಂಡಿ ತೆಗೆಯುತ್ತಿರುವುದು


ಕಡಬ ಪೇಟೆಯಲ್ಲಿ ರಾತ್ರಿ ವೇಳೆ   ಸ್ಕೂಟಿಯೊಂದು ಮಾರ್ಗದಲ್ಲಿದ್ದ ಗೋವಿಗೆ ಡಿಕ್ಕಿಯಾಗಿ ಗೋವಿಗೆ ಗಂಭೀರ ಗಾಯವಾಗಿತ್ತು. ವಾಹನ ಸವಾರ ಸಣ್ಣ  ಗಾಯಗೊಂಡು ಅಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು.

ಸಂಘತನೆಯವರು  ಪಶುವೈದ್ಯಾಧಿಕಾರಿ ಡಾ. ಅಜಿತ್ ಅವರಿಗೆ ಮಾಹಿತಿ ನೀಡಿದ ಕೂಡಲೇ ರಾತ್ರಿ 12 ಗಂಟೆ ಸುಮಾರಿಗೆ  ಸ್ಥಳಕ್ಕಾಗಮಿಸಿ ಚಿಕಿತ್ಸೆ ನೀಡಿದರೂ   ಗೋವು ಅಸುನೀಗಿತ್ತು.


ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ಕೋಡಿಬೈಲ್ ಅವರ ನೇತೃತ್ವದಲ್ಲಿ ಜೆಸಿಬಿ ತರಿಸಿ ಕಡಬ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top