ಕಡಬ ಟೈಮ್ಸ್, ಕಾಣಿಯೂರು:ಕಡಬ ತಾಲೂಕಿನ ಬೆಳಂದೂರು ಗ್ರಾಮದ ಅಬೀರ ರಾಮಣ್ಣ ಪೂಜಾರಿಯವರ ಪತ್ನಿ ಲಲಿತಾ(57.ವ)ರವರು ಕೋವಿಡ್ ನಿಂದ ಜೂ.5 ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪಾಸಿಟಿವ್ ಬಂದಿದ್ದು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಜೂ.5ರಂದು ಮುಂಜಾನೆ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತರು ಪತಿ ರಾಮಣ್ಣ ಪೂಜಾರಿ,ಪುತ್ರರಾದ ಸುರೇಶ್, ಪೊಲೀಸ್ ಸಿಬಂದಿ ಸಂತೋಷ್, ಪುತ್ರಿ ಸೌಮ್ಯ, ಸೊಸೆಯಂದಿರಾದ ಸುಹಾಸಿನಿ ಹಾಗೂ ಸ್ವಾತಿಯವರನ್ನು ಅಗಲಿದ್ದಾರೆ.


