Heart attack- ಕಡಬ: ತನ್ನ ತೋಟಕ್ಕೆ ಹೋದ ಕೃಷಿಕ ಹೃದಯಾಘಾತಕ್ಕೆ ಬಲಿ

Heart attack- ಕಡಬ: ತನ್ನ ತೋಟಕ್ಕೆ ಹೋದ ಕೃಷಿಕ ಹೃದಯಾಘಾತಕ್ಕೆ ಬಲಿ

Kadaba Times News
0

ಕಡಬ ಟೈಮ್, ಪ್ರಮುಖ ಸುದ್ದಿ: ತನ್ನ ತೋಟಕ್ಕೆ ಪೈ ಅಳವಡಿಸಲು ಹೋದ ವೇಳೆ ಕೃಷಿಕರೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ಕಡಬದಿಂದ ಜ.22 ರಂದು ವರದಿಯಾಗಿದೆ.


ಕಡಬ ಗ್ರಾಮದ ಅಲಂಗೂರು-ತಿಮರಡ್ಡ ನಿವಾಸಿ ಮೋಹನ್ ರೈ(55ವ) ಹೃದಯಾಘಾತಕ್ಕೆ ಬಲಿಯಾದ ಕೃಷಿಕ.

ತಿಮರಡ್ಡ ನಿವಾಸಿ ಕೃಷಿಕ ಮೋಹನ್ ರೈ(KADABA TIMES)


ಮುಂಜಾನೆ ತನ್ನ ಮನೆ ಸಮೀಪದ  ಕಾಡುತೋಟ ಎಂಬಲ್ಲಿನ ತನ್ನ  ತೋಟಕ್ಕೆ ಕೆಲಸದ ಸಮುವಾಗಿ ಹೋಗಿದ್ದರು ಎನ್ನಲಾಗಿದೆ.   ತೋಟಕ್ಕೆ ಹೋದವರು ಬಾರದೆ ಇರುವುದನ್ನು ಗಮನಿಸಿದ ಮನೆಯವರು ಹುಡುಕಾಡುತ್ತಾ ತೋಟಕ್ಕೆ ಹೋಗಿದ್ದರು ಎನ್ನಲಾಗಿದೆ.


ಈ ಸಂದರ್ಭದಲ್ಲಿ ಅಸ್ಪಸ್ಥಗೊಂಡ ರೀತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಸ್ಥಳೀಯರ ನೆರವಿರಲ್ಲಿ ಕಡಬ ಸಮುದಾಯ ಆಸ್ಪತ್ರೆಗೆ   ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಿಲ್ಲ ಎಂದು ತಿಳಿದು ಬಂದಿದೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top